ಭಾನುವಾರ, ಸೆಪ್ಟೆಂಬರ್ 19, 2010

ಬನ್ನಿ ಕಾವೇರಿ ರಂಗನ ದರುಶನಕೆ !!! ದೇವಾಲಯದ ಅಂಗಳಕೆ !!!



ಪಂಡಿತ್ ಭೀಮ್ ಸೇನ್ ಜೋಷಿಯವರು ಭಕ್ತಿ ತುಂಬಿ ಹಾಡಿದ ಕಂಗಳಿದ್ಯಾತಕೋ ಹಾಡಿನಿಂದ ನಿಮ್ಮನ್ನು ಸ್ವಾಗತಿಸುತ್ತೇನೆ. ಬನ್ನಿ ಕಾವೇರಿ ರಂಗನ ದರುಶನಕ್ಕೆ ಮೊದಲು ಕಾವೇರಿ ನದಿಗೆ ಹೋಗಿ ಬರೋಣ ಶ್ರೀ ರಂಗ ಪಟ್ಟಣದ  ಆದಿ ರಂಗನ  ,[ ಪಶ್ಚಿಮ ರಂಗ, ಗೌತಮ ರಂಗ , ಕಾವೇರಿ ರಂಗ  ಇನ್ನೂ ಹಲವಾರು ಹೆಸರಿನಿಂದ ಕರೆಯಬಹುದು ] ಸನ್ನಿದಾನದಲ್ಲಿ ಶ್ರೀ ರಂಗ ಪಟ್ಟಣದ ಸುತ್ತ  ಪ್ರೀತಿಯ ಆಲಿಂಗನ  ಮಾಡುವ ಕಾವೇರಿ ತಾಯಿಯ  ದರುಶನ ಮಾಡಿ ರಂಗನ ದರುಶನಕೆ  ಸಿದ್ದರಾಗೋಣ. ಸಾಮಾನ್ಯ ವಾಗಿ ಬರುವ  ಪ್ರವಾಸಿಗಳಿಗೆ ಸಾಕಷ್ಟು ಸಮಯ ಇಲ್ಲದ ಕಾರಣ ನಿಧಾನವಾಗಿ ದೇವಾಲಯ ನೋಡಲು ಸಾಧ್ಯವಾಗದು.ಬನ್ನಿ ಮುಂದೆ ಹೋಗೋಣ.ಬನ್ನಿ   ಶ್ರೀ ರಂಗ ನಾಥ ನ ಆಲಯ ಪೂರ್ವಾಭಿಮುಖ ವಾಗಿದೆ ಒಳಗೆ ಪ್ರವೇಶಿಸುವಾಗ  ತಕ್ಷಣವೇ ಬಾಗಿಲಿನ ಒಳಗಡೆ ಗೋಡೆಗೆ ತಾಗಿದಂತೆ ಶ್ರೀ ರಂಗ ನಾಥನ ದರ್ಶನ ಭಾಗ್ಯ ಈ ರೀತಿ ಆಗುತ್ತದೆ.ಬಹುಷಃ  ಯಾವುದೇ ದೇವಾಲಯದಲ್ಲಿಯೂ ಪ್ರವೇಶ ದ್ವಾರದಲ್ಲಿ  ಮುಖ್ಯ  ದೇವರು ಇರುವುದು ನನಗೆ ತಿಳಿದಿಲ್ಲ.ಗರ್ಭ ಗುಡಿಯ ರಂಗನಾಥನ  ಮೊದಲು ಇಲ್ಲೇ ನಿಮಗೆಪ್ರಥಮ ದರ್ಶನ್ ಸಿಗುತ್ತದೆ. ಹಾಗೆ ಬನ್ನಿ ದೇವಾಲಯದ ಒಳ ಆವರಣಕ್ಕೆ ಹೋಗೋಣ.ಸುಂದರ ಮುಖ ಮಂಟಪದ ಮೊಗಸಾಲೆಯಲ್ಲಿ ನಿಮ್ಮನ್ನು ವಿಷ್ಣುವಿನವಿವಿಧ ಅವತಾರಗಳ ಅಪರೂಪದ ದರ್ಶನ ನಿಮಗೆ ಸಿಗುತ್ತದೆ.ಹಾಗೆ ಎಡಗಡೆ ಪಕ್ಕಕ್ಕೆ ಬನ್ನಿ ಪ್ರದಕ್ಷಿಣೆ ಹಾಕಿದ ಹಾಗು ಆಗುತ್ತೆ ದೇವಾಲಯ ನೋಡಿದ ಹಾಗು ಆಗುತ್ತೆ.ಅರೆ ಇಲ್ಲೊಂದು ಶಾಸನ ಕಲ್ಲು ಇದೆತಮಿಳು ಲಿಪಿ ಹೊಂದಿರುವ ಇದು ಮಸುಕಾಗಿದೆ. ಅಕ್ಷರಗಳು ಸ್ಪಷ್ಟವಾಗಿ ಕಾಣುವುದಿಲ್ಲ . ಬಿ.ಎಲ್.ರೈಸ್  ರವರ ಪ್ರಕಾರ ಈ ಶಾಸನವು  ಕ್ರಿ.ಶ. ೧೨೧೦ ಕ್ಕೆ ಸಂಭಂದಿಸಿದೆ ಎಂದು ತಿಳಿಸುತ್ತದೆ,.ವೀರ ಭಲ್ಲಾಳ ದೇವನ ಆಳ್ವಿಕೆ ಉಲ್ಲೇಖವಿದ್ದು  ಗ್ರಾಮ ದತ್ತಿ ನೀಡಿದ ಬಗ್ಗೆ  ಮಾಹಿತಿ ನೀಡುತ್ತದೆ.ಸ್ವಲ್ಪ ದೂರದಲ್ಲಿ ಕೆಲವು ಹೆಜ್ಜೆ ಹಾಕಿದರೆ ಒಂದು ಕಲ್ಲಿನ ಮಂಟಪ ನೋಡಬಹುದು  ಕೆಲವೇ ಹೆಜ್ಜೆಗಳನ್ನು ಉತ್ತರದ ಕಡೆ ಹಾಕಿದರೆ ಸಿಗುವುದೇ  ಮತ್ತೊಂದು ವಿಷ್ಣು ಸನ್ನಿದಿ  ಇಲ್ಲಿ ಶ್ರೀನಿವಾಸನ ದೇವಾಲಯ ವಿದೆ ವಿಶೇಷ ದಿನಗಳಲ್ಲಿ ಇಲ್ಲಿ ಪೂಜಾ ಕಾರ್ಯಕ್ರಮಗಳು ಜರುಗುತ್ತವೆ. ಮಕರ ಸಂಕ್ರಾಂತಿಯ ಉತ್ತರಾಯಣ ಪುಣ್ಯ ಕಾಲದಲ್ಲಿ ಸ್ವರ್ಗದ ಬಾಗಿಲು ಮೂಲಕ ಬರುವ ಭಕ್ತಾದಿಗಳಿಗೆ ಇಲ್ಲಿನ ಶ್ರೀನಿವಾಸನ ದರ್ಶನ ಭಾಗ್ಯ ದೊರಕುತ್ತದೆ.ಈ ದೇವಾಲಯದಲ್ಲಿ ಕಲ್ಲಿನ ಎರಡು ಆನೆಗಳ ಮೂರ್ತಿಗಳು ನೋಡಲು ಸುಂದರವಾಗಿವೆ.ಮುಂದೆ ಸ್ವಲ್ಪ ದೂರ ಹೆಜ್ಜೆ ಹಾಕಿದರೆ ನಿಮಗೆ ಸಿಗುವ ಬಾಗಿಲು "ಸ್ವರ್ಗದಬಾಗಿಲು " ಉತ್ತರಾಯಣ ಪುಣ್ಯ ಕಾಲದಲ್ಲಿ ಈ ಬಾಗಿಲ ಮೂಲಕ ಮೊದಲು ಶ್ರೀ ರಂಗ ನಾಥ ಉತ್ಸವ ಹೊರಬರುತ್ತದೆ ನಂತರ ಭಕ್ತಾದಿಗಳು ಅನುಸರಿಸುತ್ತಾರೆ. ವರ್ಷಕ್ಕೊಮ್ಮೆ ಮಾತ್ರ ಈ ಬಾಗಿಲು ತೆರೆಯಲ್ ಪಡುತ್ತದೆ .ಹಾಗೆ ಬನ್ನಿ ನಿಮಗೆ ಈಗ ಸಿಗುವುದು ಒಂದು ಕಲ್ಲಿನ ಮಂಟಪದ ಹತ್ತಿರ ವೃಂದಾವನ  ಹತ್ತಿರಬನ್ನಿ  ನೋಡೋಣ.ವೃಂದಾವನದ ನಾಲ್ಕು  ದಿಕ್ಕುಗಳಿಗೂ ಮುಖಮಾಡಿದ ದಕ್ಷಿಣಕ್ಕೆ ಮುಖಮಾಡಿದ ಶ್ರೀ ರಂಗನಾಥ , ಪಶ್ಚಿಮ ದಿಕ್ಕಿಗೆ ವೇಣುಗೋಪಾಲ,ಉತ್ತರ ದಿಕ್ಕಿಗೆ ಜನಾರ್ಧನ ಹಾಗು ಪೂರ್ವ ದಿಕ್ಕಿಗೆ ಕೃಷ್ಣ  ನ ದರ್ಶನ ಸಿಗುತ್ತದೆ. ದಕ್ಷಿಣಕ್ಕೆ ಮುಖಮಾಡಿರುವ ರಂಗನಾಥನ ವಿಗ್ರಹದ ಶೇಷನ ಹೆಡೆ ಸ್ವಲ್ಪ ಮುಕ್ಕಗಿದೆ ಉಕಿದಂತೆ ನೋಡಲು ಸುಂದರವಾಗಿದೆ. ಇದರ ಪಕ್ಕದಲ್ಲೇ ಒಂದು ಪುಟ್ಟ ಕೊಳವಿದ್ದು ನೋಡಲು ಸುಂದರವಾಗಿದೆ. ಕೆಲವೇ ಹೆಜ್ಜೆಗಳ ಅಂತರದಲ್ಲಿ ಮತ್ತೊಂದು ಶಾಸನ ಕಲ್ಲಿದೆ ಈ ಶಾಸನದಲ್ಲಿ ವಿಜಯನಗರ ದ  ಅಚ್ಯುತ ದೇವರಾಯನ  ಉಲ್ಲೇಖವಿದ್ದು  ಆ ಸಮಯದಲ್ಲಿ ನೀಡಿದ ದತ್ತಿಗಳ ಬಗ್ಗೆ ತಿಳಿಸಲಾಗಿದೆ. ಇಲ್ಲಿಗೆ ಮೊದಲ ಹೊರ ಪ್ರಾಂಗಣದ ಪ್ರದಕ್ಷಿಣೆ ಮುಗಿಯುತ್ತದೆ.ಈ ಗಾಗಲೇ ನೀವು ಎರಡು ಭಾರಿ ಶ್ರೀ ರಂಗ ನಾಥನ ದರ್ಶನ ಮಾಡಿದ್ದೀರಿ  ಇನ್ನೂ ಹಲವಾರು ಮಾಹಿತಿಗಳಿವೆ   ಪಶ್ಚಿಮ ರಂಗನಾಥನ ದರ್ಶನ ಮಾಡುವ ಮೊದಲು ಸ್ವಲ್ಪ ವಿಶ್ರಾಂತಿ ಪಡೆಯಿರಿ   ಮತ್ತೆ ಮುಂದುವರೆಯೋಣ.ಓ.ಕೆ.

ಶುಕ್ರವಾರ, ಸೆಪ್ಟೆಂಬರ್ 10, 2010

ಶ್ರೀ ರಂಗಪಟ್ಟಣ ಚರಿತೆ ಹಾಗು ಗೌತಮ ಕ್ಷೇತ್ರ. ಪೌರಾಣಿಕ ಹಿನ್ನೆಲೆ!!!ನಾವರಿಯದ ಮಾಹಿತಿ.!!!!

ಶ್ರೀ ರಂಗ ಪಟ್ಟಣ ದ್ವೀಪಕ್ಕೆ ಸಂಭಂದಿಸಿದಂತೆ ಹಲವಾರು ದಂತ ಕತೆಗಳಿದ್ದು ಎಲ್ಲಾ ಕಥೆಗಳಿಗೆ ಇಂದಿನ ನಾವುಗಳು ಬಯಸುವಂತೆ ದಾಖಲೆಗಳ ಆಧಾರ ವಿಲ್ಲ ಆದಾಗ್ಯೂ  ಕಥೆಗಳಿಗೆ ಆಧಾರವಾಗಿ ಎಂಬಂತೆ ಕೆಲವು ಕುರುಹುಗಳು ಹಾಗೂ ಪ್ರಾಚ್ಯ ವಸ್ತು/ದಾಖಲೆ  ಸಂಗ್ರಹಾಲಯ ದಲ್ಲಿ  ಕೆಲವು ದಾಖಲೆಗಳು ಕಂಡುಬರುತ್ತದೆ. ಈ ಬಗ್ಗೆ ಹೆಚ್ಚಿನ ಸಂಶೋದನೆ ಮಾಡುವ ಅಗತ್ಯ ವಿದ್ದು ನಮ್ಮಲ್ಲಿ ಇಂತಹ ವಿಚಾರಗಳಬಗ್ಗೆ ಹೆಚ್ಚಿನ ಆಸಕ್ತಿ ಇಲ್ಲದ ಕಾರಣ ಲಭ್ಯ ವಿರುವ ಮಾಹಿತಿಯನ್ನು ಇಲ್ಲಿ ಉಲ್ಲೇಖಿಸಿದ್ದೇನೆ.ಶ್ರೀ ರಂಗಪಟ್ಟಣ ದ್ವೀಪವನ್ನು ಗೌತಮಕ್ಷೇತ್ರ  ವೆಂದೂ  ಗೌತಮ ರಂಗನಾಥ  ಸನ್ನಿಧಿ   ಎಂದೂ ಕರೆಯುವುದು ವಾಡಿಕೆ .ಇದು ಹಿಂದಿನ  ಹಲವು   ಶತಮಾನಗಳಿಂದ ಬೆಳೆದು ಬಂದಿದೆ.ಇದಕ್ಕೆ ಪುಷ್ಟಿ ಕೊಡಲೇನೋ ಎಂಬಂತೆ ಶ್ರೀ  ರಂಗನಾಥನ ಸನ್ನಿಧಿ  ಆಲಯದಲ್ಲಿ ಗೌತಮ ಋಷಿಯ ಮೂರ್ತಿಯೂ  ಸಹ ಇದೆ.ಹಾಗೆ
ಶ್ರೀ ರಂಗಪಟ್ಟಣ ದ್ವೀಪದ ಪಶ್ಚಿಮಕ್ಕೆ ಕಾವೇರಿ  ಮಡಿಲಲ್ಲಿ  ಗೌತಮ ಕ್ಷೇತ್ರ ಎಂಬ ಹೆಸರಿನ ಮತ್ತೊಂದು ದ್ವೀಪ ವಿದೆ. ಅಲ್ಲಿ  ಗೌತಮ ಮುನಿಗಳು ತಪ್ಪಸ್ಸು ಮಾಡಿದರೆಂದೂ  ಹೇಳುವ ಜಾಗದಲ್ಲಿ ಒಂದು ಮಂದಿರವಿದ್ದು ಅಲ್ಲಿ ಹಲವಾರು ಮುನಿಗಳ ಮೂರ್ತಿಗಳನ್ನು ಸ್ಥಾಪಿಸಲಾಗಿದೆ .ಎರಡನೇ ಚಿತ್ರದಲ್ಲಿ ಗೌತಮ ಕ್ಷೇತ್ರದಿಂದ ಶ್ರೀ ರಂಗ ಪಟ್ಟಣ ದ್ವೀಪ  ಕಾಣುವ  ಒಂದು ನೋಟ ವಿದೆ.ಮೂರನೇ ಚಿತ್ರದಲ್ಲಿ  ಬಲ ಗಡೆ ಒಂದು  ಕಲ್ಲಿನ ಮಂಟಪ ಕಾಣಬಹುದಾಗಿದ್ದು ಆ ಜಾಗ ದಲ್ಲಿ ಗೌತಮಋಷಿಗಳು ತಪಸ್ಸು ಮಾಡುತ್ತಿದ್ದರೆಂದು ಹೇಳುತ್ತಾರೆ. ಬಿ.ಎಲ್. ರೈಸ್ ರವರ ಎಪಿಗ್ರಾಫಿಯ ದಲ್ಲಿ ಈ ಬಗ್ಗೆ ಉಲ್ಲೇಖವಿದ್ದು  ಈ ಮಂಟಪದ ಒಂದು ಬಂಡೆಯ ಮೇಲೆ ಈ ಗೌತಮ ಮುನಿಯಿ....... ಹ......ತೀರ್ತ  ಎಂದೂ ಪಶ್ಚಿಮ ರಂಗನಾಥನ ಸಾಯುಜ್ಯವಹುದು ಎಂದು ಬರೆಯಲಾಗಿದೆ.

ದೇವಾಲಯದ .ಅಂದರೆ ಶ್ರೀ ರಂಗನಾಥನ ದೇವಾಲಯದ ಉತ್ತರ ಗೋಡೆಯ ಕಲ್ಲಿನಲ್ಲಿನ ಒಂದು ಶಾಸನದಲ್ಲಿ ಕಾವೇರಿ ವನ ಮಧ್ಯ ದೇಶೆ ವಿಲ [ಸ ].ತ್ ಶ್ರೀ ರಂಗ ಪಟ್ಟಣಾ  ಭಿದೇ. ವೈಕುಂಟೆ ಮುನಿ ಗೌತಮಸ್ಯ  ತಪಸಾ ಹೃಷ್ಟಹ ಪುರಾಣಹ ಪುಮಾನ್  ಎಂದು ಹೇಳಿ ಗೌತಮ  ಋಷಿಯ  ತಪಸನ್ನು ಸ್ಮರಿಸಲಾಗಿದೆ ಹಾಗು ಶ್ರೀ  ರಂಗನಾಥನಿಗೂ ಹಾಗೂ  ಗೌತಮ  ಋಷಿಗೂ  ಇರುವ ಸಂಭಂದ ತಿಳಿಸಲಾಗಿದೆ.ಮೂರನೇ ಹಾಗೂ  ನಾಲ್ಕನೇ  ಚಿತ್ರದಲ್ಲಿ ಶ್ರೀ ರಂಗನಾಥ ಸ್ವಾಮೀ ದೇವಾಲಯ  1820  ರಲ್ಲಿ ಇದ್ದ ರೀತಿಯನ್ನು ತೋರಿಸುವ ಅಪರೂಪದ ಚಿತ್ರಣವಿದೆ [ ಕೃಪೆ ಅಂತಜಾಲ ]. 1791 ರಲ್ಲಿ ಶ್ರೀ ರಂಗ ಪಟ್ಟಣ ಹೇಗಿತ್ತು ಎಂಬ ಬಗ್ಗೆ ಅನಾಮದೇಯ ರೊಬ್ಬರು ಚಿತ್ರಿಸಿರುವ ಮೇಲಿನ  ಚಿತ್ರಗಳು  ಅಂದಿನ ದಿನದ ಶ್ರೀ ರಂಗ ಪಟ್ಟಣ ವದ ವೈಭವ ವನ್ನು ನೆನಪಿಸುತ್ತದೆ. ಕ್ರಿ. ಶ. ೧೮೨೦  ರಲ್ಲಿ  ಶ್ರೀ ರಂಗನಾಥನ ರಥ ಹೇಗಿತ್ತು ಎಂಬ ಚಿತ್ರಣ ಇಲ್ಲಿದೆ.ಇದು ಗೌತಮ ಹಾಗೂ ಶ್ರೀ ರಂಗ ಪಟ್ಟಣದ  ಕ್ಷೇತ್ರ  ವಿಷಯವಾದರೆ.ಮುಂದುವರೆದು ಇನ್ನೊಂದು ಕಥೆ ನೋಡಿ!!!
ಇನ್ನೊಂದು  ವಿಚಾರ ಶ್ರೀ ರಂಗ ಪಟ್ಟಣ ದ  ಚರಿತೆಯದು ಈ ದಾಖಲೆಯಲ್ಲಿ ಶ್ರೀ ರಂಗ ಪಟ್ಟಣ  ದ್ವೀಪ ಸಮುಚ್ಚಯ ಮೂರು ಹಳ್ಳಿ ಗಳಿಂದ ಕೂಡಿತ್ತೆಂದೂ   ಹಂಗರಹಳ್ಳಿ, ಹೊಸಳ್ಳಿ  ಹಾಗೂ ಧ್ರುವ ಎಂಬ ಮೂರು ಹಳ್ಳಿ ಗಳು ಸೇರಿದ್ದವೆಂದೂ ಒಂದು ದಿನ  ಹಂಗರ ಹಳ್ಳಿಯ ಒಬ್ಬ ಹೆಂಗಸಿಗೆ ಸೇರಿದ   ಹಸು ತನ್ನ ಹಾಲನ್ನು ಕಾಡಿನಲ್ಲಿದ್ದ ಒಂದು ಹುತ್ತಕ್ಕೆ ಧಾರೆ ಹರಿಸಿದ ಕಾರಣ ಆ ಜಾಗದಲ್ಲಿ    ಅಗೆದಾಗ ಶ್ರೀ ರಂಗ ನಾಥನ ಮೂರ್ತಿ ಹೊರ ಬಂದಿತೆಂದೂ ಹೇಳಲಾಗಿದೆ, ನಂತರ ಹಸುವಿನ ಒಡತಿ   ಈ ಮೂರ್ತಿಗೆ ಮರದಿಂದ ಒಂದು ಆಕೃತಿ ನಿರ್ಮಿಸಿ  ಸೂರು ಕಲ್ಪಿಸಿದಳೆಂದು ತಿಳಿಸಲಾಗಿದೆ.. ಇದಕ್ಕೆ ಆಧಾರವಾಗಿ ಪ್ರಹ್ಲಾದ ಚರಿತೆ ಯನ್ನು ಉಲ್ಲೇಖಿಸಲಾಗಿದೆ.ಮೇಲಿನ ಎರಡು ಚಿತ್ರಗಳಲ್ಲಿ ಈ ಬಗ್ಗೆ ದಾಖಲೆ ನೋಡಬಹುದಾಗಿದೆ.
  ಮೊದಲಿಗೆ ರಂಗನಾಥನ ದೇವಾಲಯ ದ  ನಿರ್ಮಾಣ ಗಂಗರ ಕಾಲದಲ್ಲಿ ಕ್ರಿ.ಶ  894 ರಲ್ಲಿ     ಗಂಗರಸರ ಪ್ರಧಾನಿ ತಿರುಮಲಯ್ಯ ಎಂಬುವರು  ಈ ದೇವಾಲಯ  ನಿರ್ಮಾಣ ಮಾಡಿಸಿದರೆಂದು ತಿಳಿದುಬರುತ್ತದೆ.ನಂತರ ಕ್ರಿ.ಶ .1120 ರಲ್ಲಿ ಹೊಯ್ಸಳ ಸಾಮ್ರಾಜ್ಯದ ವಿಷ್ಣುವರ್ಧನ ನ ತಮ್ಮ ಉದಯಾದಿತ್ಯ ರ ಕಾಲದಲ್ಲಿ ಶ್ರೀ ರಂಗ ನಾಥ ದೇವಾಲಯ  ಮತ್ತಷ್ಟು ಅಭಿವೃದ್ದಿ ಕಂಡಿದೆ, ಹಾಗು ಶ್ರೀ ರಂಗ ಪಟ್ಟಣ ಊರೂ ಸಹ ಕೀರ್ತಿ ಗಳಿಸಿ ಅಭಿವೃದ್ದಿ ಹೊಂದಿದೆ. ಕಾವೇರಿ ನದಿಯ ದಡ ದಲ್ಲಿ  ಅಷ್ಟಗ್ರಾಮಗಳ ಅನಾವರಣ ಈ ಅವಧಿಯಲ್ಲಿ ಆಯಿತೆಂದು  ತಿಳಿದು ಬರುತ್ತದೆ.ನಂತರ ವಿಜಯ ನಗರ ಅರಸರ ಪ್ರತಿನಿಧಿ ಹಾಗೂ ನಾಗಮಂಗಲ ದ ದಂಡ ನಾಯಕ    ತಿಮ್ಮಣ್ಣ  ನು ಕ್ರಿ.ಶ  . 1454 ರಲ್ಲಿ  ವಿಜಯ ನಗರ ಅರಸರ ಅನುಮತಿ ಪಡೆದು ಶ್ರೀ ರಂಗ ಪಟ್ಟಣದಲ್ಲಿ ಕೋಟೆ ಕಟ್ಟಿ ಸಿದನೆಂದು ಹಾಗೂ ಶ್ರೀ ರಂಗ ನಾಥ ದೇವಾಲಯವನ್ನು ಅಭಿವೃದ್ದಿ ಪಡಿಸಿ  ಮತ್ತಷ್ಟು ವಿಸ್ತರಿಸಿದನೆಂದು  ದಾಖಲೆಗಳು ಹೇಳುತ್ತವೆ. ಇವನ ನಂತರ ಬಂದ ಶ್ರೀ ರಂಗರಾಯನೂ ಸಹ ವಿಜಯ ನಗರದ ಪ್ರತಿನಿಧಿ ಯಾಗಿ ಆಳ್ವಿಕೆ ನಡೆಸಿ ಆ ನಂತರ ಕ್ರಿ.ಶ . 1610 ರಲ್ಲಿ ರಾಜ ವೊಡೆಯರ್ ಶ್ರೀ ರಂಗ ಪಟ್ಟಣವನ್ನು ತಮ್ಮ ಆಳ್ವಿಕೆಗೆ ಒಳಪಡಿಸಿಕೊಂಡು  ಮೈಸೂರು ಸಂಸ್ತಾನದ ರಾಜಧಾನಿಯಾಗಿ ಶ್ರೀ ರಂಗ ಪಟ್ಟಣ ವನ್ನು ಘೋಷಿಸಿ  ಇಲ್ಲೇ ನೆಲೆ ನಿಂತರು , ನಂತರ  ಚಾಮರಾಜ ವೊಡೆಯರ್   v [೧೬೧೭-೧೬೩೭,], ಇಮ್ಮಡಿ ರಾಜ ವೊಡೆಯರ್ [೧೬೩೭-೧೬೩೮], ಕಂಟೀರವ ನರಸರಾಜ ವೊಡೆಯರ್  1 ,[೧೬೩೮-೧೬೫೯],ದೇವರಾಜ ವೊಡೆಯರ್ [ ೧೬೫೯-೧೬೭೩] , ಚಿಕ್ಕ ದೇವರಾಜ ವೊಡೆಯರ್ [೧೬೭೩-೧೭೦೪],  ನರಸರಾಜ ಒಡೆಯರ್ [ ೧೭೦೪ -೧೭೧೪],  ಒಂದನೇ ಕೃಷ್ಣರಾಜ ಒಡೆಯರ್  [ ೧೭೧೪-೧೭೩೨], ಏಳನೇ ಚಾಮರಾಜ ಒಡೆಯರ್ [ ೧೭೩೨-  ೧೭೩೪ ] , ಎರಡನೇ ಕೃಷ್ಣರಾಜ ಒಡೆಯರ್  [ ೧೭೩೪- ೧೭೬೧ ]      ಆ ನಂತರ  ಹೆಸರಿಗೆ ಮೈಸೂರ ಅರಸರೂ ಇದ್ದೂ    ಹೈದರ್ ಅಲಿಯ   ಪ್ರತಿನಿಧಿಸಿದ್ದ ಆಡಳಿತದಲ್ಲಿ   ಎರಡನೇ  ಕೃಷ್ಣ ರಾಜ ಒಡೆಯರ್ [ ೧೭೬೧- ೧೭೬೬] 
                                ನಂಜರಾಜ ವೊಡೆಯರ್ [೧೭೬೬-೧೭೭೦ ],ಬೆಟ್ಟದ ಚಾಮರಾಜ ವೊಡೆಯರ್ v11     {೧೭೭೦-೧೭೭೬] ನಂತರ ಖಾಸಾ ಚಾಮರಾಜ ವೊಡೆಯರ್ V111  ರ  ಪ್ರತಿನಿದಿಯಾಗಿ ಹೈದರ್ ಅಲಿ ,ಆನಂತರ ಟಿಪ್ಪೂ ಸುಲ್ತಾನ್         ಆಳ್ವಿಕೆ ನಡೆಸಿ ಕ್ರಿ .ಶ.1799  ರ ಮೈಸೂರಿನ ಅಂತಿಮ ಯುದ್ದದ ಸೋಲಿನ ನಂತರ  ಶ್ರೀ ರಂಗ ಪಟ್ಟಣ ದ ಒಂದು  ಸುವರ್ಣ ಅಧ್ಯಾಯ ಮುಗಿದಿತ್ತು.  ಇಂದು ಕರ್ನಾಟಕ ರಾಜ್ಯದ ಮಂಡ್ಯಾ ಜಿಲ್ಲೆ ಯಲ್ಲಿನ ಒಂದು ಸಣ್ಣ ತಾಲೂಕ ಆಗಿ ಗತ ಇತಿಹಾಸದ ಸ್ಮಾರಕಗಳ  ಬೀಡಾಗಿ ಪ್ರವಾಸಿಗಳನ್ನು ಕೈಬೀಸಿ ಕರೆದಿದೆ.ಬನ್ನಿ ಮುಂದಿನ  ಸಂಚಿಕೆಯಲ್ಲಿ ಶ್ರೀ ರಂಗನ ದರ್ಶನಕ್ಕೆ ಹೋಗೋಣ.

ಬುಧವಾರ, ಸೆಪ್ಟೆಂಬರ್ 1, 2010

ಬನ್ನಿ ದ್ವೀಪದ ಪರಿಚಯ ಮಾಡಿಕೊಳ್ಳೋಣ.!!!!


ನಮಸ್ಕಾರ  ಬನ್ನಿ ನಿಮಗೆ ಸ್ವಾಗತ. ನಮ್ಮ ಭೂಮಿ ಗ್ರಹದಲ್ಲಿ  ನಮ್ಮ ಅಸ್ತಿತ್ವ ಎಲ್ಲಿದೆ ಅಂತಾ ಹುಡುಕಿದರೆ  ಅದು ಕಣ್ಣಿಗೆ ಕಾಣದಷ್ಟು ಶೂನ್ಯವಾಗಿದೆ. ಆದಾಗ್ಯೂ ನಾವು ಭೂಮಿಯಲ್ಲಿ ಪರಸ್ಪರ ಹೊಂದಾಣಿಕೆ ಯಿಂದ ಬದುಕುವುದನ್ನು ಕಲಿಯಲಿಲ್ಲ.ಅರಿವಿನ ಜ್ಞಾನದ ಹಣತೆ ಬೆಳಗಿದಾಗ ನಮ್ಮ ಅಸ್ತಿತ್ವ
ಈ ಭೂಮಿಯಲ್ಲಿ ಏನು ಎಂದು ಅರ್ಥವಾಗುತ್ತೆ.ನಮ್ಮ ವಿಶ್ವದಲ್ಲಿ ಹಲವಾರು ದೇಶಗಳು ತಮ್ಮದೇ ಆದ  ಇತಿಹಾಸದ ಘನತೆ ಹೊಂದಿ ಪ್ರಪಂಚಕ್ಕೆ ಸಾರಿ ಹೇಳುತ್ತಿವೆ. ಅಂತೆಯೇ ನಮ್ಮ ದೇಶದ ಬಹಳಷ್ಟು ಹಳ್ಳಿ,ಪಟ್ಟಣ, ಮುಂತಾದವುಗಳು ದೇಶದ ಇತಿಹಾಸಕ್ಕೆ ತನ್ನದೇ ಆದ ಕೊಡುಗೆ ನೀಡಿ ಮೆರೆದಿವೆ.ಇವುಗಳ ನಡುವೆ ನನಗೆ ಗೋಚರಿಸಿದ ಒಂದು ದ್ವೀಪವೇ ಈ ಶ್ರೀ ರಂಗ ಪಟ್ಟಣ .ಈ ಊರಿನಲ್ಲಿ ಪುರಾಣವಿದೆ, ಇತಿಹಾಸವಿದೆ,ಪ್ರಪಂಚವನ್ನೇ ಬೆಚ್ಚಿಬೀಳಿಸಿದ ಮಾಹಿತಿಗಳಿವೆ,ತಲ ತಲಾಂತರದಿಂದ ಈ ಊರಿಗೆ ವಲಸೆ ಬರುವ ಹಕ್ಕಿಗಳಿವೆ.ಇಲ್ಲಿನ ಇತಿಹಾಸ ತಿಳಿಸದೇ ನಮ್ಮ ದೇಶದ ಇತಿಹಾಸ ಪೂರ್ಣವಾಗುವುದಿಲ್ಲವೆಂಬ ಸತ್ಯವಿದೆ. ಈ ಊರಿನ ಇತಿಹಾಸಕ್ಕೆ ಪ್ರಪಂಚದ ಹಲವಾರು ಪ್ರಸಿದ್ದ  ವ್ಯಕ್ತಿಗಳು ತಳುಕು ಹಾಕಿಕೊಂಡಿದ್ದಾರೆ.ಈ ಊರಿನ ಇತಿಹಾಸದ ಬಗ್ಗೆ ವಿಶ್ವಾದ್ಯಂತ ಸಾವಿರಾರು ಪುಸ್ತಕಗಳು ಪ್ರಕಟಗೊಂಡಿವೆ, ಅಂತರ್ಜಾಲದಲ್ಲಿ ಮಾಹಿತಿಗಳು ಹರಿದಾಡುತ್ತಿವೆ.ಇಷ್ಟೆಲ್ಲಾ ಆದರೂ ಇಲ್ಲಿನ ಸ್ಮಾರಕಗಳ  ಮಾಹಿತಿ ಅಪೂರ್ಣವಾಗಿಯೇ ಉಳಿದಿದೆ.ನಿಜದ ಇತಿಹಾಸ ಬಲ್ಲ ಕಾವೇರಿ ನದಿ ಹಾಗು ಶ್ರೀ ರಂಗನಾಥ  ಇಬ್ಬರೂ ತಮಗೆ ಏನೂ ಗೊತ್ತಿಲ್ಲದಂತೆ ನಿಸ್ಸಹಾಯಕರಾಗಿ ಉಳಿದಿದ್ದಾರೆ.ಬನ್ನಿ ಸುಂದರ ದ್ವೀಪದ ಪರಿಚಯ ಮಾಡಿಕೊಳ್ಳೋಣ
.ಶ್ರೀ ರಂಗಪಟ್ಟಣ ಮಂಡ್ಯಾ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಇಲ್ಲಿ ಸುಮಾರು ಅಂದಾಜು 16000  ಜನಸಂಖ್ಯೆ  ಇದೆ. ಶ್ರೀರಂಗ ಪಟ್ಟಣ ಕರ್ನಾಟಕದ ಒಳನಾಡಿನಲ್ಲಿರುವ
,ಕಾವೇರಿ ಮಡಿಲಿನ ಒಂದು ಸುಂದರ ದ್ವೀಪ ಸುತ್ತಲೂ ಕಾವೇರಿ ನದಿಯ ಆಲಿಂಗನ ,
ಹಸಿರಮಡಿಲಲ್ಲಿ  ಜುಳು ಜುಳು ನಾದದ ನಡುವೆ ಹಕ್ಕಿಗಳ ಕಲರವ ಬನ್ನಿ ಇಲ್ಲಿನೋಡಿ ಕಾವೇರಿನದಿ ಶ್ರೀರಂಗಪಟ್ಟಣ   ದ್ವೀಪ ಪ್ರವೇಶಿಸುವಾಗ ಉಂಟಾಗುವ ಎರಡು ಭಾಗವಾಗಿ ಸೀಳಿ ಹೋಗುವ ಒಂದು ದೃಶ್ಯ. ಹಾಗೆ ಈ ದ್ವೀಪವನ್ನು ಪ್ರೀತಿ ಇಂದ ಆಲಂಗಿಸುವ ಪ್ರಾರಂಭದ ದೃಶ್ಯವೂ ಹೌದು.ಮುಂದೆ ಸಾಗುವ ಕಾವೇರಿ ಉತ್ತರಾಭಿ ಮುಖವಾಗಿ ಹಾಗೂ ದಕ್ಷಿಣ ಅಭಿಮುಖವಾಗಿ  ಪ್ರವಹಿಸಿ ಮುಂದೆ ಮತ್ತೊಂದು ತುದಿಯ  ಸಂಗಮದಲ್ಲಿ ಸೇರಿಕೊಳ್ಳುತ್ತಾಳೆ  
.
ಉತ್ತರ ಕಾವೇರಿಯ
ಒಡಲಿಗೆ ಲೋಕಪಾವನಿ ನದಿಯೂ ಸೇರಿಕೊಳ್ಳುತ್ತದೆ.ಶ್ರೀ ರಂಗ ಪಟ್ಟಣ ದ್ವೀಪ ಎರಡು ಭಾಗ ಗಳಾಗಿದ್ದು  ಒಂದು ರಾಜರುಗಳು ಆಡಳಿತ ನಡೆಸಲು ಕೋಟೆ ಕಟ್ಟಿಕೊಂಡಿದ್ದ  ಶ್ರೀ ರಂಗ ಪಟ್ಟಣ ಹಾಗೂ ಪ್ರಜೆಗಳು ವಾಸವಿದ್ದ  ಗಂಜಾಂ ಈ ಎರಡೂ ಭಾಗಗಳು ಸೇರಿ ಒಂದು ದ್ವೀಪವಾಗಿದ್ದು ಈ ದ್ವೀಪ   ಈ ಶ್ರೀ ರಂಗ ಪಟ್ಟಣ.
, ಇತಿಹಾಸದ ಕಣಜವಾಗಿ ಮೆರೆದಿದೆ.ಶ್ರೀರಂಗಪಟ್ಟಣ ದ್ವೀಪ ಇತಿಹಾಸದ ಮಾಯಾ ದ್ವೀಪವಾಗಿ ಲೋಕಕ್ಕೆ ತಿಳಿಯದ ಹಲವಾರು ವಿಚಾರಗಳನ್ನು ಬಚ್ಚಿಟ್ಟುಕೊಂಡು ನಿರ್ಲಿಪ್ತವಾಗಿ ನಿಂತಿದೆ.ಇದಕ್ಕೆ ಕಾವೇರಿ ನದಿ ಹಾಗೂ ಶ್ರೀ  ರಂಗನಾಥರು  ಸಾಕ್ಷಿಯಾಗಿದ್ದಾರೆ...............................................................ಆಲ್ವಾ !!!!! . ಜಿ.ಪಿ ರಾಜರತ್ನಂ ರವರು ತಮ್ಮ ರಚನೆಯಲ್ಲಿ ಬರೆದು ರಾಜು ಅನಂತ ಸ್ವಾಮೀ ಹಾಡಿದ  ನೀನ್ ನಂ ಅಟ್ಟಿಗ್ ಬೆಳಕಂಗಿದ್ದೆ ನಂಜಿ  ಹಾಡಿನಲ್ಲಿನ ಒಂದು ಪ್ಯಾರ" ಸೀರಂಗ್ ಪಟ್ನದ್ ತಾವ್ ಕಾವೇರಿ ಹರ್ದು,  ಎರಡೋಳಾಗಿ  ಪಟ್ನದ್ ಸುತ್ತಾ ಹರ್ದೂ  ಸಂಗಂ ದಾಗೆ ಸೇರ್ಕೋ ಮಳ್ಳಿ " ಅಂತಾ ಸಾಗುತ್ತೆ ಕವಿಯ ಕಲ್ಪನೆ ಈ ದ್ವೀಪವನ್ನು ಹೇಗೆ ವರ್ಣಿಸಿದೆ ನೋಡಿ .................ಮುಂದೆ ಪ್ರಾರಂಭಿಸೋಣ    ಸ್ಮಾರಕಗಳ ದರ್ಶನ ಹಾಗೂ ಮಾಹಿತಿ.ಬನ್ನಿ ನನ್ನೊಡನೆ ನೀವು ಹೆಜ್ಜೆ ಹಾಕಿ.ನಿಮಗೆ ಸ್ವಾಗತ.ಸುಸ್ವಾಗತ.