ಸೋಮವಾರ, ಆಗಸ್ಟ್ 8, 2011

ಈ ದ್ವೀಪದಲ್ಲಿ ಹರಿಯಜೋತೆಗೆ ಹರನೂ ಇದ್ದಾನೆ !!!!! ಐತಿಹಾಸಿಕ ಗಂಗಾಧರೇಶ್ವರ ದೇವಾಲಯ ನೋಡೋಣ ಬನ್ನಿ !!!


ಶ್ರೀ ಗಂಗಾಧರೇಶ್ವರ ದೇವಾಲಯ.
ಕಳೆದ ಸಂಚಿಕೆಯಲ್ಲಿ ಲಾಲ್ ಮಹಲ್ ಅರಮನೆಯ ಬಗ್ಗೆ ತಿಳಿದು ಕೊಂಡಿರಿ.ಅದಕ್ಕೆ ಹೊಂದಿಕೊಂಡಂತೆ ಪೂರ್ವ ದಿಕ್ಕಿಗೆ ಮುಖಮಾಡಿರುವ ಒಂದು ದೇವಾಲಯ ನೀವು ನೋಡಬಹುದು. ಅದೇ ಗಂಗಾಧರೇಶ್ವರ ದೇವಾಲಯ.ಹೌದು ಈ ಸುಂದರ ದ್ವೀಪದಲ್ಲಿ ಹರಿಯ ಜೊತೆಗೆ ಹರನೂ ನೆಲೆಸಿದ್ದಾನೆ. ಈ ದೇವಾಲಯದ ಬಗ್ಗೆ  ಬೆಂಗಳೂರಿನ ಖ್ಯಾತ ಪತ್ರಕರ್ತರಾದ ಶ್ರೀ ರಿಗ್ರೆಟ್ ಐಯ್ಯರ್ ಅವರು ಸಂಕ್ಷಿಪ್ತವಾಗಿ ಹಾಗು ಸುಂದರವಾಗಿ ಮಾಹಿತಿ ಕೈಪಿಡಿ ತಯಾರಿಸಿ  ಉಚಿತವಾಗಿ ಪ್ರಕಟಣೆ ಮಾಡಿದ್ದಾರೆ. ಬನ್ನಿ ಒಂದಷ್ಟು ಮಾಹಿತಿ ತಿಳಿಯೋಣ.ಶ್ರೀರಂಗ ಪಟ್ಟಣದ ಕೋಟೆ ಕಟ್ಟುವ ಮುನ್ನ  ಲಿಂಗದ ಮೇಲೆ ಕಾವೇರಿ ಹರಿದು ಹೋಗುತ್ತಿದ್ದ ಕಾರಣ , ಹಾಗು ಶಿವಲಿಂಗ ಕಾವೇರಿ ನದಿಯ ಮಧ್ಯಭಾಗದಲ್ಲಿ ಇದ್ದಕಾರಣ  ಅಂದಿನ ನಾಗರೀಕರು  ನಡುಹೊಳೆ  ಗಂಗಾಧರ " ಎಂಬ ಹೆಸರನ್ನು ಕರೆಯುತ್ತಿದ್ದರು ,ಲಿಂಗದ ಮೇಲೆ ಎಲ್ಲೆಡೆಯಲ್ಲೂ  ಶಿಲೆಯಲ್ಲಿ ಕೂದಲು  ಜಡೆ ರೀತಿಯಲ್ಲಿ  ಮೂಡಿರುವ ಕಾರಣ" ಜಡೆ ಗಂಗಾಧರೇಶ್ವರ" ಅಂತಾನೂ ಕರೆಯಲಾಗುತ್ತಿದೆ. ದ್ವೀಪದಲ್ಲಿ  ನೆಲೆಸಿದ್ದ "ಗೌತಮ ಋಷಿಗಳು " ಚೈತ್ರಮಾಸದ ಚಿತ್ರಾ ಪೂರ್ಣಿಮೆಯಂದು  ಗಂಗಾಧರೆಶ್ವರನನ್ನು  ಪೂಜಿಸಿದ ಕಾರಣ ಇಂದಿಗೂ ಅದೇ ಚಿತ್ರಾ ಪೂರ್ಣಿಮೆಯಂದು  ಈ ದೇವಾಲಯದಲ್ಲಿ  ಬ್ರಹ್ಮ ರಥೋತ್ಸವ ಜರುಗುತ್ತದೆ.